Thursday 11 March 2021

ಬೆಳೆಗಳ ಚಕ್ರ

 


ಬೆಳೆಗಳ ವಿಧಾನಗಳಲ್ಲಿಯೂ ಕಳೆಗಳನ್ನು ನಿಯಂತ್ರಿಸುತ್ತಾರೆ.

1. ಮಿಶ ಬೇಸಾಯದಲ್ಲಿ ಒಂದೇ ಹೊಲದಲ್ಲಿ ಎರಡು ಅಥವಾ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾರೆ.
ಉದಾಹರಣೆಗೆ ತೊಗರಿಬೇಳೆಯನ್ನು ಜೋಳ ಅಥವಾ ರಾಗಿಯೊಂದಿಗೆ ಬೆಳೆಯುತ್ತಾರೆ.
 
2. ಬೆಳೆಗಳ ಚಕ್ರ ವಿಧಾನದ ಮೂಲಕ ಬೇರೆ ಬೇರೆ ಕಾಲದಲ್ಲಿ ಒಂದೇ ಹೊಲದಲ್ಲಿ ಧಾನ್ಯಗಳನ್ನು ಹಾಗೂ ಕಾಳುಗಳನ್ನು ಬೆಳೆಯುತ್ತಾರೆ. ಋತುಗಳಿಗೆ ತಕ್ಕಂತೆ ಬೆಳೆಗಳು ಬದಲಾಗುತ್ತವೆ. ಯಾಂತ್ರಿಕ ವಿಧಾನದಿಂದ ಕಳೆಗಳಿಂದ ಬೆಳೆ ರಕ್ಷಣೆ ರಾಸಾಯನಿಕ ವಿಧಾನದಿಂದ ಜೈವಿಕ ವಿಧಾನದಿಂದ ಕಳೆಗಳಿಂದ ಬೆಳೆ ರಕ್ಷಣೆ ಕಳೆಗಳಿಂದ ಬೆಳೆ ರಕ್ಷಣೆ

10.2 ಸಸ್ಯರೋಗಗಳಿಂದ ರಕ್ಷಣೆ
ಶಿಲೀಂಧ್ರ,  ಬ್ಯಾಕ್ಟೀರಿಯಾ,  ವೈರಸ್  ಮುಂತಾದ  ಸೂಕ್ಷ್ಮಜೀವಿಗಳಿಂದ ಸಸ್ಯರೋಗಗಳು  ಬರುತ್ತವೆ.  ಕೆಲವು ರೋಗಗಳು ಮಣ್ಣಿನಿಂದಲೇ ಬರಬಹುದು. ಗಾಳಿಯಿಂದಲೂ ಹಾಗೂ ಬೀಜಗಳಿಂದಲೂ ಕೆಲ ರೋಗಗಳು ಹರಡಬಹುದು. ಕಡಲೆಕಾಯಿಯಲ್ಲಿ ಚುಕ್ಕೆರೋಗ,  ಗೋಧಿಯಲ್ಲಿ ಶಿಲೀಂಧ್ರ,  ಹಾಗೂ  ಭತ್ತದಲ್ಲಿ  ಎಲೆಗಳು ತೂತುಬೀಳುವುದು ಸಾಮಾನ್ಯ ರೋಗಗಳಾಗಿವೆ.

ಮಣ್ಣಿನಿಂದ  ಬರುವ  ರೋಗಗಳನ್ನು  ಸೂಕ್ತ  ಔಷಧಿಗಳಿಂದ  ತಡೆಗಟ್ಟಬಹುದು.  ಗಾಳಿಯಿಂದುಂಟಾಗುವ ರೋಗಗಳನ್ನು ಶಿಲೀಂಧ್ರನಾಶಕಗಳನ್ನು ಸಿಂಪಡಿಸುವ ಮೂಲಕ ನಿಯಂತ್ರಿಸಬಹುದು. ಆರೋಗ್ಯಕರ ಬೀಜಗಳನ್ನು ಆಯ್ದು  ಅವುಗಳನ್ನು  ಬಿತ್ತನೆಗೆ  ಮೊದಲು  ರಸಾಯನಿಕಗಳಿಂದ  ಉಪಚಾರ  ಮಾಡಿ  ನೆಡುವುದರಿಂದ ಬೀಜಗಳಿಂದುಂಟಾಗುವ  ರೋಗಗಳ  ನಿಯಂತ್ರಣ  ಸಾಧ್ಯ.  ರಾಸಾಯನಿಕಗಳು  ರೋಗಕಾರಕ  ಕ್ರಿಮಿಗಳನ್ನು ಕೊಲ್ಲುತ್ತವೆ.

10.3 ಕೀಟಗಳಿಂದ ರಕ್ಷಣೆ
ಬೆಳೆಗಳಿಗೆ ಕೀಟಗಳ ಹಾವಳಿ ಸಾಮಾನ್ಯ. ಮಿಡತೆಗಳು, ಇರುವೆಗಳು, ದುಂಬಿಗಳು ಇನ್ನಿತರ ಹುಳುಗಳು ಎಲೆಗಳನ್ನು ಕಚ್ಚುತ್ತವೆ, ತಿನ್ನುತ್ತವೆ ಹಾಗೂ ಸಸ್ಯಭಾಗಗಳಿಂದ ರಸವನ್ನು ಹೀರುತ್ತವೆ. ಸೂಕ್ತ ರಾಸಾಯನಿಕಗಳ ಉಪಯೋಗದಿಂದ ಕೀಟಗಳನ್ನು ನಿಯಂತ್ರಿಸಬಹುದು. ಈ ರಸಾಯನಿಕಗಳಿಗೆ ಕೀಟನಾಶಕಗಳು ಎನ್ನುತ್ತಾರೆ. ಮಾನೋಕ್ರೋಟೋಫಾಸ್, ಡೈಮಿಥೋಯೇಟ್ ಮತ್ತು ಕ್ಲೋರೋಫಿರಿಫೂ ಸಾಮಾನ್ಯವಾಗಿ ಬಳಕೆಯಾಗುವ ಕೀಟನಾಶಕಗಳು.  ಶಿಲೀಂಧ್ರನಾಶಕಗಳನ್ನು (ಜಿಣಟಿರಛಿಜಜ)  ಉಪಯೋಗಿಸಿ  ಕೀಟಗಳನ್ನು  ನಿಯಂತ್ರಿಸುತ್ತಾರೆ. ಅಗ್ರೋಸಾನ್ ಮತ್ತು ಸೆರೆಸಾನ್ ಸಾಮಾನ್ಯ ಶಿಲೀಂಧ್ರನಾಶಕಗಳು. ಕೀಟನಾಶಕಗಳು ವಿಷಕಾರಿ. ಆದ್ದರಿಂದ ಅವುಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಬೇಕು.

11. ಕಟಾವು
ಕೀಟಗಳಿಂದ ತೊಂದರೆಗೊಳಗಾದ ಸಸ್ಯಗಳುಬೆಳೆಗಳು ಸಂಪೂರ್ಣವಾಗಿ ಬೆಳೆದುನಿಂತಾಗ, ಧಾನ್ಯಗಳು ತುಂಬಿರುವ ಬೆಳೆಗಳನ್ನು ಕತ್ತರಿಸಿ, ಧಾನ್ಯಗಳನ್ನು ಬೇರ್ಪಡಿಸುತ್ತಾರೆ. ಇದಕ್ಕೆ ಕಟಾವು ಎಂದು ಹೆಸರು. ಯಂತ್ರ ಅಥವಾ ಕುಡುಗೋಲುಗಳ ಸಹಾಯದಿಂದ ಬೆಳೆಗಳನ್ನು ಕಟಾವು ಮಾಡುತ್ತಾರೆ. ಧಾನ್ಯಗಳನ್ನು ಹೊಟ್ಟಿನಿಂದ ಬೇರ್ಪಡಿಸುತ್ತಾರೆ. ಧಾನ್ಯಗಳನ್ನು ಬೇರ್ಪಡಿಸುವ ವಿಧಾನವನ್ನು (ಣಡಿಜಟಿರ) ಎಂದು ಕರೆಯುತ್ತಾರೆ. ಇದನ್ನು ಯಂತ್ರಗಳಿಂದ ಮಾಡುತ್ತಾರೆ.

ಮಾನವನಿಂದ ಭತ್ತ ಮತ್ತು ಟೊಮ್ಯಾಟೋಗಳ ಕಟಾವು ವಾನವ ಶವುದ ಒಕ್ಕಣ ಯಂತ್ರಗಳಿಂದ ಒಕ್ಕಣೆ

12. ಸಂಗ್ರಹಣೆ
ಕಟಾವಿನ ನಂತರ ಧಾನ್ಯಗಳನ್ನು ಸರಿಯಾಗಿ ಸಂಗ್ರಹಿಸಬೇಕು. ಇಲಿ, ಕೀಟಗಳಿಂದ ಉತ್ಪನ್ನಗಳನ್ನು ಕಾಪಾಡುವುದು ಅತಿ ಮುಖ್ಯ. ತಾಜಾ ಆಗಿ ಕಟಾವು ಮಾಡಿದ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಸೆಣಬಿನ ಚೀಲಗಳಲ್ಲಿ ಅಥವಾ ಡಬ್ಬಿಗಳಲ್ಲಿ ಶೇಖರಿಸಬೇಕು.
ಬೃಹತ್ ಪ್ರಮಾಣದಲ್ಲಿ ಧಾನ್ಯಗಳನ್ನು ಸಂಗ್ರಹಿಸಲು ಕಣಜಗಳು (ರಡಿಚಿಟಿಚಿಡಿಜ) ಬೇಕು. ಮನೆಯಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡಲು ಒಣಗಿದ ಬೇವಿನ ಎಲೆಗಳನ್ನು ಬಳಸುತ್ತಾರೆ. ಬೇವಿನ ಎಲೆಗಳು ಕೀಟಗಳನ್ನು ನಿಯಂತ್ರಿಸುತ್ತವೆ.

13. ಹಸಿರು ಕ್ರಾಂತಿ

ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು, ಹೆಚ್ಚು ಇಳುವರಿ ನೀಡುವ ಬೀಜಗಳನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚು ಮಾಡಿರುವ ಕೃಷಿ ಪದ್ಧತಿಗೆ ಹಸಿರು ಕ್ರಾಂತಿ ಎನ್ನುತ್ತಾರೆ. ಭಾರತವು ಹಸಿರು ಕ್ರಾಂತಿಯಲ್ಲಿ ಅತ್ಯಂತ ಹೆಚ್ಚು ಯಶಸ್ಸು ಪಡೆದಿರುವ ರಾಷ್ಟ್ರವೆಂಬ ಖ್ಯಾತಿ ಪಡೆದಿದೆ.

ಜಪಾನಿನಲ್ಲಿ 1940ರ ದಶಕದಲ್ಲಿ ವಿಶೇಷ  ಬಗೆಯ ಗೋಧಿಯ ತಳಿಗಳನ್ನು ಬಳಸಿಕೊಂಡು ಗೋಧಿಯ ಉತ್ಪಾದನೆಯನ್ನು ಅಧಿಕಗೊಳಿಸುವ ಮೂಲಕ ಹಸಿರು ಕ್ರಾಂತಿ ಆರಂಭವಾಯಿತು. ನಂತರ ಅಮೆರಿಕಾದಲ್ಲಿ 1960ರ ಸುಮಾರು ಕೃಷಿ ವಿಜ್ಞಾನಿ ನಾರ್ಮನ್ ಬಾರ್ಲಾಗ್ ಹೆಚ್ಚು ಇಳುವರಿ ನೀಡುವ ಗೋಧಿಯ ತಳಿಗಳನ್ನು ಸಂಶೋಧಿಸಿದನು.    ಇದರಿಂದ ವಿಶ್ವದಾದ್ಯಂತ  ಹಸಿರು ಕ್ರಾಂತಿ ಆರಂಭವಾಯಿತು. ಆದ್ದರಿಂದ ನಾರ್ಮನ್ ಬಾರ್ಲಾಗ್ನನ್ನು ಹಸಿರು ಕ್ರಾಂತಿಯ ಶಕಪುರುಷ ಎಂದು ಕರೆಯುತ್ತಾರೆ.
 
ನಾರ್ಮನ್ ಬಾರ್ಲಾಗ್ 1914 - 2009 : ಹಸಿರುಕ್ರಾಂತಿಯ ಪಿತಾಮಹ

ಭಾರತದಲ್ಲಿ ಆಮದು ಮಾಡಿಕೊಂಡ ಹೆಚ್ಚು ಇಳುವರಿ ನೀಡುವ ಗೋಧಿ ಬೀಜಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಯಿಂದ 1960ರ ದಶಕದ ಉತ್ತರಾರ್ಧದಲ್ಲಿ ಹಸಿರು ಕ್ರಾಂತಿ ಆರಂಭವಾಯಿತು. ಕೃಷಿ ವಿಜ್ಞಾನಿಗಳಾದ ಎಂ.ಎಸ್. ಸ್ವಾಮಿನಾಥನ್, ಬಿ.ಪಿ. ಪಾಲ್ ಮತ್ತು ಆಗಿನ ಕೇಂದ್ರ ಕೃಷಿ ಮಂತ್ರಿ ಸಿ. ಸುಬ್ರಹ್ಮಣ್ಯಂ ಭಾರತದಲ್ಲಿ  ಹಸಿರು  ಕ್ರಾಂತಿಗೆ  ಕಾರಣರಾದ  ಪುರುಷರು.  ಆಗ  ದೇಶಾದ್ಯಂತ  ಕೃಷಿ  ಭೂಮಿಯನ್ನು ವಿಸ್ತರಿಸಲಾಯಿತು. ಎರಡು ಬೆಳೆಗಳನ್ನು ಬೆಳೆಯುವ ಪದ್ಧತಿಯನ್ನು ಆರಂಭಿಸಲಾಯಿತು. ಮಾಹಿತಿ ಪ್ರಸಾರಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು ತೆರೆಯಲಾಯಿತು. ಪ್ರತಿ ಜಿಲ್ಲೆಗೂ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ಗಳನ್ನು ನೇಮಿಸಲಾಯಿತು. ಅಣೆಕಟ್ಟುಗಳು, ನೀರಾವರಿ ಕಾಲುವೆಗಳು ಮತ್ತು ಆಳವಾದ ಬಾವಿಗಳನ್ನು ನಿಮರ್ಿಸಲಾಯಿತು. ರೈತರಿಗೆ ರಸಾಯನಿಕ ಗೊಬ್ಬರಗಳನ್ನು ಒದಗಿಸಲು ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಿದರು. ವಿಜ್ಞಾನಿಗಳಾದ ಎಂ ಎಸ್ ಸ್ವಾಮಿನಾಥನ್, ಬಿ. ಪಿ. ಪಾಲ್ ಮತ್ತಿತರರು ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಹೆಚ್ಚು ಇಳುವರಿ ನೀಡುವ ಭತ್ತ, ಗೋಧಿ ಇತ್ಯಾದಿ ಧಾನ್ಯಗಳ ಹೊಸ ತಳಿಗಳನ್ನು ಕಂಡುಹಿಡಿದರು.

ಬೀಜಗಳನ್ನು ಬೆಳೆಯಲು ಕೃಷಿಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿಜ್ಞಾನಿಗಳು  ನೇರವಾಗಿ  ರೈತರೊಂದಿಗೆ  ಸಂವಾದ  ನಡೆಸಿ  ಆಧುನಿಕ  ಕೃಷಿ  ತಂತ್ರಜ್ಞಾನದ  ಪರಿಚಯ  ಮಾಡಿಕೊಟ್ಟರು. ಈ ಕ್ರಾಂತಿಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿತು. ಆಹಾರ ಧಾನ್ಯಗಳ ಸಂಗ್ರಹಾಗಾರಗಳನ್ನು ನಿಮರ್ಿಸಲಾಯಿತು. ಈ ಹಸಿರು ಕ್ರಾಂತಿಯ ಫಲವಾಗಿ 1950ರಲ್ಲಿ ಕೇವಲ 50 ಮಿಲಿಯನ್ ಟನ್ಗಳಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2000ದಲ್ಲಿ 100 ಮಿಲಿಯನ್ ಟನ್ಗಳಿಗೇರಿತು. 1990ರಿಂದೀಚೆಗೆ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ.

 14. ಸಾರಾಂಶ
ಈ ಪಾಠದಲ್ಲಿ ನೀವು ಈ ಕೆಳಗಿನ ಪ್ರಮುಖ ವಿಷಯಗಳನ್ನು ಕಲಿತಿರಿ

9 ಮಣ್ಣನ್ನು ಸಿದ್ಧಪಡಿಸುವಿಕೆ, ಬಿತ್ತನೆ ವಿಧಾನಗಳು, ಗೊಬ್ಬರ ನೀರಾವರಿ, ಬೆಳೆ ರಕ್ಷಣೆ, ಕಟಾವು, ಧಾನ್ಯ ಸಂಗ್ರಹಣೆ ಮತ್ತು ನೀರು ನಿರ್ವಹಣೆ  ಗೊಬ್ಬರಗಳ ವಿಧಿಗಳು, ರಸಗೊಬ್ಬರಗಳ ಬಳಕೆ, ಸಾವಯವ ಕೃಷಿ (ಎರೆಹುಳು ಗೊಬ್ಬರ)  ಸುಧಾರಿತ ನೀರಾವರಿ ತಂತ್ರಗಳು
9 ಬೆಳೆ ನಿರ್ವಹಣೆ - ಕಳೆಗಳಿಂದ ಬೆಳೆ ರಕ್ಷಣೆ, ಸಸ್ಯ ರೋಗಗಳು ಮತ್ತು ಕೀಟಗಳು 9 ಕಟಾವು, ಆಹಾರ ಧಾನ್ಯ ಸಂಗ್ರಹಣೆ, ಹಸಿರು ಕ್ರಾಂತಿಯ ಅವಶ್ಯಕತೆ ಮತ್ತು ಕುಲಾಂತರಿ ಬೆಳೆಗಳ ಉಪಯುಕ್ತತೆ

ಚಟುವಟಿಕೆಗಳು
1. ಸಾಂಪ್ರದಾಯಿಕ ಮತ್ತು ಯಾಂತ್ರಿಕ ವಿಧಾನಗಳನ್ನು ಉಪಯೋಗಿಸಿ ಉಳುಮೆ ಮಾಡುತ್ತಿರುವ ಹೊಲಗಳಿಗೆ ಭೇಟಿ ನೀಡಿ.
2. ರೈತರು ಹೊಲಗಳಲ್ಲಿ ಬಿತ್ತನೆ ಮತ್ತು ನಾಟಿ ಮಾಡುವಾಗ ಭೇಟಿ ನೀಡಿ ವೀಕ್ಷಿಸಿ.
3. ಎರೆಹುಳು ಗೊಬ್ಬರ ತಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವಿಧಾನ ತಿಳಿದುಕೊಳ್ಳಿ ಮತ್ತು ವರದಿಯೊಂದನ್ನು ತಯಾರಿಸಿ.
4. ಹನಿ ಮತ್ತು ಚಿಲುಮೆ ನೀರಾವರಿ ಪದ್ಧತಿಯಿರುವ ಹೊಲಗಳಿಗೆ ಭೇಟಿ ನೀಡಿ. ಎರಡು ಪದ್ಧತಿಗಳನ್ನು ಗಮನಿಸಿ ಮತ್ತು ವರದಿಯೊಂದನ್ನು ತಯಾರಿಸಿ.

ಅಭ್ಯಾಸಗಳು
1. ಮಣ್ಣನ್ನು ಉಳುವುದರ ಉಪಯೋಗಗಳೇನು?
2. ಮುಂಗಾರು ಬೆಳೆಗಳೆಂದರೇನು? ಎರಡು ಉದಾಹರಣೆಗಳನ್ನು ಕೊಡಿ.
3. ಹಿಂಗಾರು ಬೆಳೆಗಳೆಂದರೇನು? ಎರಡು ಉದಾಹರಣೆಗಳನ್ನು ಕೊಡಿ.
4. ಎರಡು ಜೈವಿಕ ರಸಗೊಬ್ಬರಗಳನ್ನು ಹೆಸರಿಸಿ.
5. ಎರಡು ರಾಸಾಯನಿಕ ರಸಗೊಬ್ಬರಗಳನ್ನು ಹೆಸರಿಸಿ.
6. ಸಾವಯವ ಗೊಬ್ಬರ ಎಂದರೇನು?
7. ಎರೆಹುಳು ಗೊಬ್ಬರ ಎಂದರೇನು?
8. ರೈಝೋಬಿಯಂಗಳು ಎಲ್ಲಿ ಕಂಡುಬರುತ್ತವೆ?
9. ಕಳೆಗಳು ಎಂದರೇನು?
10. ಕೀಟಗಳು ಎಂದರೇನು?
11. ಎರಡು ಕೇಟನಾಶಗಳನ್ನು ಹೆಸರಿಸಿ.
12. ಕಣಜಗಳೆಂದರೇನು?
13. ಕುಲಾಂತರಿ ಬೆಳೆಗಳೆಂದರೇನು? ಉದಾಹರಣೆಗಳನ್ನು ಕೊಡಿ.
14. ಹಸಿರು ಕ್ರಾಂತಿಯ ಕಾರ್ಯಕ್ಕೆ ನೊಬೆಲ್ ಪಾರೆತೋಷಕ ಪಡೆದವರು ಯಾರು?
15. ಭಾರತದಲ್ಲಿ ಹಸಿರು ಕ್ರಾಂತಿಗೆ ಕಾರಣರಾದ ಇಬ್ಬರು ವಿಜ್ಞಾನಿಗಳನ್ನು ಹೆಸರಿಸಿ.
16. ಟ್ರಾನ್ಸಜೆನಿಕ್ ಬೆಳೆಗಳು ಎಂದರೇನು?
17. ಬೆಳೆ ರಕ್ಷಣೆ ಎಂದರೇನು?

 ಬಹು ಆಯ್ಕೆ ಮಾದರಿ ಪ್ರಶ್ನೆಗಳು

1. ಮಣ್ಣನ್ನು ಉಳುವುದು ಮುಖ್ಯ ಏಕೆಂದರೆ
ಚಿ) ಉಳುವೆ ಮಣ್ಣನ್ನು ಸಡಿಲಗೊಳಿಸುತ್ತದೆ
ಛ) ಬೇರುಗಳು ಮಣ್ಣಿನ ಒಳಗೆ ಹೋಗುವಂತೆ ಸಹಾಯ ಮಾಡುತ್ತದೆ
ಛಿ) ಎರೆಹುಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ
ಜ) ಮೇಲೆ ಹೇಳಿದ ಎಲ್ಲಾ ಕಾರ್ಯಗಳೂ ಉಳುಮೆಯಿಂದ ಆಗುತ್ತವೆ

2. ಸಾವಯವ ರಸಗೊಬ್ಬರವು ಅನ್ನು ಹೆಚ್ಚಿಸಲು ಸಹಕಾರಿ
ಚಿ) ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಗುಣ
ಛ) ಮಣ್ಣಿನ ಸಾಂದ್ರತೆ
ಛಿ) ಸೂಕ್ಷ್ಮಜೀವಿಗಳ ಬೆಳವಣಿಗೆ
ಜ) ಮೇಲಿನ ಎಲ್ಲವೂ

3. ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ರಸಗೊಬ್ಬರ?
ಚಿ) ರೈಝೋಬಿಯಂ                        ಛ) ಅಝಟೋಬ್ಯಾಕ್ಟರ್
ಛಿ) ಕೆಲವು ಹಸಿರು ನೀಲಿ ಆಲ್ಗೆಗಳು              ಜ) ಎಲ್ಲವೂ

4.  ಈ ಕೆಳಗಿನವುಗಳಲ್ಲಿ ಯಾವುದು ಕಳೆನಾಶಕ?
ಚಿ) ಉಪ್ಪಿನ ದ್ರಾವಣ                        ಛ) ಡೆಟಾಲ್
ಛಿ) ಸೋಪಿನ ದ್ರಾವಣ                       ಜ) 2.4-ಡೈಕ್ಲೋರೋಫೀನಕ್ಸಿ ಅಸಿಟಿಕ್ ಆಮ್ಲ

5. ಹಸಿರು ಕ್ರಾಂತಿಗಾಗಿ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ ಯಾರು?
ಚಿ) ಎಂ ಎಸ್ ಸ್ವಾಮಿನಾಥನ್                  ಛ) ಬಿ ಪಿ ಪಾಲ್
ಛಿ) ನಾರ್ಮನ್ ಬೋಲರ್ಾಗ್                  ಜ) ಹರಗೋವಿಂದ ಖೊರಾನಾ

6. ಕೆಳಗಿನ ಯಾವ ಹೇಳಿಕೆಯು ತಪ್ಪು?
ಚಿ) ರಾಸಾಯನಿಕ ಗೊಬ್ಬರಗಳು ಕಾಖರ್ಾನೆಗಳಲ್ಲಿ ಉತ್ಪತ್ತಿಯಾಗುತ್ತವೆ.
ಛ) ರಾಸಾಯನಿಕ ಗೊಬ್ಬರಗಳು ರಾಸಾಯನಿಕಗಳು.
ಛಿ) ಸಾವಯವ ಗೊಬ್ಬರವು ಮಣ್ಣಿಗೆ ಹೆಚ್ಚು ಹ್ಯೂಮಸ್ನ್ನು ಒದಗಿಸುತ್ತದೆ.
ಜ) ಸಾವಯವ ಗೊಬ್ಬರವು ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುತ್ತದೆ.

7. ಕೆಳಗಿನವುಗಳಲ್ಲಿ ಯಾವ ಒಣ ಎಲೆಗಳನ್ನು ಸಂಪ್ರದಾಯ ಪದ್ಧತಿಯಲ್ಲಿ ಆಹಾರಧಾನ್ಯ ಶೇಖರಿಸಲು ಉಪಯೋಗಿಸುತ್ತಾರೆ?
ಚಿ) ಹಿಪ್ಪುನೇರಳೆ                           ಛ) ಕೊತ್ತಂಬರಿ
ಛಿ) ದತ್ತೂರ                              ಜ) ಬೇವು

8. ಕೆಳಗಿನವರಲ್ಲಿ ಯಾರನ್ನು ಭಾರತದ ಹಸಿರುಕ್ರಾಂತಿಯಪಿತಾಮಹನೆಂದು ಕರೆಯುತ್ತಾರೆ?
ಚಿ) ಎಂ.ಎಸ್. ಸ್ವಾಮಿನಾಥನ್                  ಛ) ಕುರಿಯೆನ್
ಛಿ) ಸಿ. ಸುಬ್ರಮಣಿಯಂ                      ಜ) ಸುರಮಣಿಯನ್ ಸ್ವಾಮಿ

9. ಆಹಾರ ಬೆಳೆಗಳಿಗೆ ಅತಿಹೆಚ್ಚು ನೀರೊದಗಿಸಿದರೆ ಅದು  ಉಂಟುಮಾಡುತ್ತದೆ.
ಚಿ) ಆಹಾರದ ಉತ್ಪಾದನೆಯಲ್ಲಿ ಹೆಚ್ಚಳ            ಛ) ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ
ಛಿ) ಮಣ್ಣಿನ ಹೆಚ್ಚು ಉತ್ಪಾದನೆ                  ಜ) ಮಣ್ಣಿನ ಫಲವತ್ತತೆಯಲ್ಲಿ ಇಳಿಕೆ

10. ಎರೆಹುಳುವಿನ ಗೊಬ್ಬರವು ಒಂದು.
ಚಿ) ಜೈವಿಕ ಗೊಬ್ಬರ                         ಛ) ಸಾವಯವ ಗೊಬ್ಬರ
ಛಿ) ರಾಸಾಯನಿಕ ಗೊಬ್ಬರ                    ಜ) ಕೀಟನಾಶಕ